Friday, February 25, 2011

ಮಾತು-ಮೌನ

ಮೌನವೂ ಕೆಲವೊಮ್ಮೆ ಬಸವಳಿದುಬಿಡುತ್ತದೆ,
ಏನನ್ನೂ ಹೇಳುವ ಹಂಬಲವಿಲ್ಲದೇ.
ಬಂಗಾರದಂತಹ ಮೌನ ಕಾಸಿಗೂ ಕಡೆಯಾಗಿಬಿಡುತ್ತದೆ,
ಮಾತೆಂಬ ಸೇವಕನ ಬೆಂಬಲವಿಲ್ಲದೇ.

ನಾವು ನಿಂತ ನೆಲ ನಮ್ಮದಾಗಬೇಕು,
ನಮ್ಮ ಮನದ ಮಾತು ಸ್ವಂತದ್ದಾಗಬೇಕು,
ಬದುಕಿರುವವರೆಗೂ ಗೌರವದ ಬದುಕೊಂದು ನಮ್ಮ ಜೊತೆಗಿರಬೇಕೆಂದರೆ...
ಹಕ್ಕುಗಳ ಬೇಲಿಯೊಂದು ನಮ್ಮ ಸುತ್ತಲಿರಬೇಕು,
ಮತ್ತು ಮಾತುಗಳಿಂದಲೇ ಅದರ ನಿಮರ್ಾಣವಾಗಬೇಕು.

ಕೆಲವನ್ನು ಅಭಿನಂದಿಸಬೇಕು,
ಕೆಲವನ್ನು ಪ್ರತಿಬಂಧಿಸಬೇಕು,
ಕೆಲವನ್ನು ಹಲುಸಾಗಿ ಬೆಳೆಸಬೇಕು,
ಮತ್ತೆ ಕೆಲವನ್ನು ಮೊಳಕೆಯಲ್ಲೇ ಚಿಗುಟಿ ಹಾಕಬೇಕು

ಇಷ್ಟೆಲ್ಲವನ್ನೂ ಮೌನ ಎಂದಿಗೂ ಮಾಡಲಾರದು.
ಅದಕೆಂದೇ ನಾವು ಮಾತನಾಡಬೇಕು.
ನಾವು ಮಾತನಾಡಬೇಕು, ನಮಗಾಗಿ
ನಾವು ಏನೆಂದು ಅರಿತುಕೊಳ್ಳಲು ಬಯಸುತ್ತಿರುವ ಈ ಜಗಕಾಗಿ.

No comments: