Friday, February 25, 2011

ಕೃಷಿಗೆ ವಿದೇಶಿ ಬಂಡವಾಳ ಬೇಕೆ?

ಕೃಷಿಗೆ ವಿದೇಶಿ ಬಂಡವಾಳ ಬೇಡ... ನಮ್ಮ ದೇದಲ್ಲಿ ಬಹಳಷ್ಟು ರೈತರಿಗೆ, ಮುಖ್ಯವಾಗಿ ಸಣ್ಣ ಹಿಡುವಳಿದಾರರಿಗೆ ಕೃಷಿ ವಾಣಿಜ್ಯಕ್ಕಿಂತಲೂ ಜೀವನೋಪಾಯದ ಮಾರ್ಗವಾಗಿರುತ್ತದೆ. ಬಹಳಷ್ಟು ರೈತರು ತಮ್ಮ ಅಹಾರ ಧಾನ್ಯಗಳಿಗೆ, ತರಕಾರಿಗಳಿಗೆ ತಮ್ಮ ತುಂಡು ಭೂಮಿಯನ್ನೇ ಅವಲಂಬಿಸಿರುತ್ತಾರೆ. ಈಗಾಗಲೇ ಕೃಷಿ ಆಧುನಿಕರಣ, ವಾಣಿಜ್ಯ ಬೆಳೆಗಳು, ರಸಗೊಬ್ಬರ, ಹೈಬ್ರೀಡ್ ಬೀಜ ಎಂದೆಲ್ಲ ರೈತರ ಭೂಮಿಯ ಸಾರವನ್ನು ನಾಶ ಮಾಡಿ, ಅವರ ಆಥರ್ಿಕ ಕ್ಷಮತೆಯನ್ನೂ ಹಾಳು ಮಾಡಿ ಅವನನ್ನು ಆತ್ಮಹತ್ಯೆಯ ದವಡೆಗೆ ತಂದು ನಿಲ್ಲಿಸಿದ್ದಾಗಿದೆ ( 1990ಕ್ಕೂ ಮುಂಚೆ ರೈತರು ಎಂಥ ಬರಗಾಲಕ್ಕೂ, ಬೆಳೆ ಹಾನಿಗೂ ಅತ್ಮಹತ್ಯೆ ಪರಿಹಾರ ಎಂದು ಎಣಿಸಿರಿಲಿಲ್ಲ).
ವಿದೇಶಿಯರು ಬಂಡವಾಳ ಹೂಡಿದಾಗ ಅವರಿಗೆ ಲಾಭವನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳೂ ಗೌಣವಾಗುತ್ತವೆ. ಭೂಮಿಯ ಭವಿಷ್ಯತ್ತಿನ ಸಾರದ ಬಗ್ಗೆ ಗಮನ ಹರಿಸಲಾರರು (ಈಗಾಲೇ ನಾವು ಎಂಡೋಸಲ್ಫಾನ್ನ್ನಂತಹ ವಿಷವನ್ನು ನಿಷೇಧಸಲೂ ಮೀನಮೇಷ ಎಣಿಸುತ್ತಿದ್ದೇವೆ, ಬೂಮಿಯನ್ನೇ ಹಾಳು ಮಾಡುವ ರಸಗೊಬ್ಬರಗಳನ್ನು ಬಳಸದೇ ಇಂದಿನ ಕೃಷಿ ಉತ್ಪಾದನೆಯ ಮಟ್ಟವನ್ನು ಕಾಯ್ದುಕೊಳ್ಳುವ ಮಾರ್ಗ ತಿಳಿಯದೇ ದಿಕ್ಕು ಕಾಣದಂತಾಗಿದ್ದೇವೆ). ರೈತರು ಪ್ರತಿ ಕೃಷಿ ಅವಶ್ಯಕತೆಗೂ ವಿದೇಶಿ ಬಂಡವಾಳವನ್ನೇ ಅವಲಂಬಿಸಬೇಕಾಗಬಹುದು ( ರೈತರಾಗಲೇ ತಮ್ಮ ಸಾಂಪ್ರದಾಯಿಕ ಬೀಜಗಳನ್ನು ನಾಶ ಮಾಡಿಕೊಂಡು ಎರಡನೆ ಬಾರಿಗೆ ಫಸಲೇ ನಿಡದ ಹೈಬ್ರೀಡ್ ಬೀಜಗಳಿಗೆ ಮೊರೆ ಹೋಗಿಯಾಗಿದೆ). ರೈತರ ಮೇಲೆ ಲಾಭದಾಯಕ ಬೆಳೆಗಳನ್ನೇ ಬೆಳೆಯುವಂತೆ ಒತ್ತಡಗಳುಂಟಾಗಬಹುದು ( ಈಗಾಗಲೇ ಸಾಲ, ಹೆಚ್ಚುತ್ತಿರುವ ಕೃಷಿ ಖಚರ್ುಗಳಿಂದ ಅನಿವಾರ್ಯವಾಗಿ ರೈತ ಬೆಳೆದ ಬೆಳೆಯಲ್ಲಿ ಒಂದು ಕಾಳನ್ನೂ ತನಗೆಂದು ಇರಿಸಿಕೊಳ್ಳದೇ ಮಾರುಕಟ್ಟೆಗೆ ಸಾಗಿಸಬೇಕಾದ ಪರಿಸ್ಥಿತಿಯಲ್ಲಿದ್ದಾನೆ). ಸದ್ಯ ನಮ್ಮ ಕೃಷಿಗೆ ಈಗಿರುವ ಸ್ಥಿತಿಯಲ್ಲಿ ವಿದೇಶಿ ಬಂಡವಾಳಕ್ಕಿಂತಲೂ ಸಕರ್ಾರದ ಸಬ್ಸಿಡಿಗಳ ಅವಶ್ಯಕತೆಯಿದೆ. ಏಕೆಂದರೆ ಕೃಷಿ ವೆಚ್ಚ ಗಣನೀಯವಾಗಿ ಹೆಚ್ಚುತ್ತಿದೆ ಅದಕ್ಕೆ ತಕ್ಕಂತೆ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ಏರಿಕೆಯಾಗುತ್ತಿಲ್ಲ (ಕೃಷಿ ಉತ್ಪನ್ನಗಳು ಮೂಲಭೂತ ಅವಶ್ಯಕತೆಗಳಾದ ಧಾನ್ಯ, ಎಣ್ಣೆ ಕಾಳುಗಳು, ತರಕರಿಗಳು ಮುಂತಾದವುಗಳನ್ನು ಒಳಗೊಂಢಿರುವುದರಿಂದ ಅದು ಸುಲಭ ಸಾಧ್ಯವೂ ಅಲ್ಲ). ಎಲ್ಲದಕ್ಕಿಂತ ಹೆಚ್ಚಾಗಿ ದೇಶದ ಆಥರ್ಿಕ ಸ್ಥಿರತೆಯನ್ನು ನಿರ್ಧರಿಸುವ ಕೃಷಿಯಂತಹ ಉದ್ಯಮವೊಂದು ವಿದೇಶಿಯರ ಬಂಡವಾಳದ ಮೇಲೆ ಅವಲಂಬಿತವಾಗುವುದು ಭದ್ರತೆಯ ದೃಷ್ಟಿಯಿಂದಲೂ ಯೋಚಿಸಬೇಕಾದ ವಿಷಯ.

No comments: