ಇಲ್ಲಿ ಮತ್ತೊಬ್ಬರಿಲ್ಲ ಮಾತನಾಡಲು,
ಮೌನದ ಸೌದ ಮುರಿಯಬೇಕೆನಿಸಿದರೂ,
ಬೇರೆ ಕಟ್ಟುವುದೆನೆಂದು ತಿಳಿಯಲಾರದೆ,
ಮತ್ತೆ ಮೌನವಾಗುತಿದೆ ಮನಸು.
ಚಿಂತಿಸುತಿದ್ದೆ, ರೋಡಿಗೆ ಟಾರಿಲ್ಲ , ಟ್ಯಾಂಕಿಗೆ ನೀರಿಲ್ಲ,
ಬೆಳೆಗೆ ಬೆಲೆಯಿಲ್ಲ, ಅಣುಶಕ್ತಿ ಸ್ಥಾವರಕೆ ಇಂಧನವೂ ಇಲ್ಲ.
ಆದರೂ ಭರವಸೆಯಿತ್ತು ಎಲ್ಲದಕೂ ಒಂದು ದಿನ ಉತ್ತರ ಸಿಗಬಹುದೆಂದು.
ದಾರಿಗೆ ದಿಕ್ಕಿಲ್ಲದಿದ್ದರೂ ನಡೆಯುತಲಿದ್ದೆ, ದಾರಿಯೇ ಇಲ್ಲವೆಂದರೆ ಹೆಜ್ಜೆಯಿಡುವುದೆಲ್ಲಿ?
ಸಿಡಿದ ಬಾಂಬಿನ ಹೊಗೆಯಲಿ ಅದ್ದಿದ ಮನಸು,
ಚೀರಬೇಕೆನಿಸುತಿದೆ, ಚೂರಾಗುವ ಮೊದಲು,
ಉಸಿರಾಟಕೆ ಶಕ್ತಿಯಿಲ್ಲದಿರುವಾಗ..........
ನಾನ್ಯಾರನು ಮುಟ್ಟಲಾರೆ, ಮುಟ್ಟಿ ಮಾತನಾಡಲಾರೆ.
ಮೌನದ ಕುಕ್ಕರಿನಲ್ಲಿಯೇ ಕುದಿಯಲಿ ಮನಸು
ಎಂದಾದರೊಂದು ದಿನ ಸಿಡಿದು ಸ್ಪೋಟಗೊಂಡೀತು,
ನನಗೂ ತಿಳಿಯದೆ .....
1 comment:
Goudre wonderfull poem
Post a Comment