Friday, March 16, 2012

ಒಬ್ಬನೇ ಸಚಿನ್...

ಅಭಿನಂದನೆಗಳು...

ಬಹಳಷ್ಟು ಸಾರಿ ಈ ಮಾತನ್ನು ಬಾಯಿಂದ ಮಾತ್ರ ಹೇಳುತ್ತೇವೆ, ಆದರೆ ಎಂದೋ ಒಮ್ಮೆ ಹೃದಯದಿಂದ ಹೇಳುತ್ತೇವೆ. ನಿನ್ನೆ ಹಾಗೆ ಎದೆಯಾಳದಿಂದ ಅಭಿನಂದನೆಗಳನ್ನು ಹೇ

ಳುವ ಸಂದರ್ಭ ಬಂದಿತು. ಸಚಿನ್ ಬಾರಿಸಿದ ನೂರನೆ ಶತಕ... ಕ್ರಿಕೇಟ್ ಇತಿಹಾಸ ಎಂದೂ ಕೇಳರಿಯದ ದಾಖಲೆಯೊಂದನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿತು. ಆದರೆ ಕ್ರಿಕೇಟ್ ದೇವರ ಆ ಸಾಧನೆಗೆ ಸಾಕ್ಷಿಯಾದ ಪಂದ್ಯ ಮಾತ್ರ ಯಾಕೋ ಮೃಷ್ಟಾನ್ನ ಭೋಜನದ ಕೊನೆಯ ತುತ್ತಿನಲ್ಲಿ ನೋಣವೊಂದು ಬಿದ್ದು ಹೊಟ್ಟೆ ಸೇರಿದಂತ ಅನುಭವ ನೀಡೀತು. ಸಚಿನ್ ಸೆಂಚುರಿ ಬಾರಿಸಿದರೆ ಭಾರತ ಆ ಪಂದ್ಯವನ್ನು ಸೋಲುತ್ತದೆ ಎಂಬ ಮೂಢನಂಬಿಕೆಯನ್ನು ದೃಡಪಡಿಸುವಂತೆ ಭಾರತ ಬಾಂಗ್ಲಾದಂತಹ ಸಾಧಾರಣ ತಂಡದೆದುರು ಸೋತು ಹೋಯಿತು.

ಸಚಿನ್ ಎಂಬ ಪದವೇ ಭಾರತದ ಯುವಜನತೆಗೊಂದು ಪ್ರೇರಕ ಮಂತ್ರವಿದ್ದಂತೆ. ನಾನು ಸಚಿನ್ ಅಭಿಮಾನಿಯಾಗಲು ಕಾರಣ ಅವರ ಸಾಧನೆಗೂ ಮೀರಿದ ಅವರ ಅನುಕರಣೀಯ ಖಾಸಗಿ ಜೀವನ. ಎಂತಹ ಒತ್ತಡನ್ನೂ ಬೇಸರಿಸಿಕೊಳ್ಳದೇ ನಿಭಾಯಿಸಬಲ್ಲ ಅವರ ಸಾಮಥ್ರ್ಯ, ದುರಹಂಕಾರವಿಲ್ಲದ ಮಾತುಗಾರಿಕೆ, ಯಾವುದೇ ಅತಿರೇಕಗಳಿಲ್ಲದ ಪರಿಶುದ್ಧ ಸಂಸಾರಿಕ ಜೀವನ, ಎಂತಹ ಟೀಕೆಗಳಿಗೂ ಬರಿಯ ಬ್ಯಾಟ್ನಿಂಲೇ ಉತ್ತರಿಸುವ ಛಾತಿ... ಎಲ್ಲವೂ ನನ್ನನ್ನು ಅವರ ಅಭಿಮಾನಿಯನ್ನಾಗಿಸಿವೆ. ಸಾಧನೆಯಂಬ ಬೆಳೆಯ ಜೊತೆಗೆ ಅಹಂಕಾರ, ಲೋಲುಪತೆ, ದುಬರ್ುದಿಯಂತಹ ಕಳೆಗಳು ಸಹಜವಾಗಿ ಬೆಳೆದುಬಿಡುತ್ತವೆ. ಆದರೆ ಸಚಿನ್ ಅಂತಹ ಕಳೆಯ ಲವಲೇಶವೂ ಮೂಡದಂತೆ ಸಾಧನೆಯ ಬೆಳೆ ತಗೆದ ಬದುಕಿನ ಗದ್ದೆಯ ಪರಿಪೂರ್ಣ ಬೇಸಾಯಗಾರ.

ಸದ್ಯ ಭಾರತದ ಕ್ರಿಕೆಟ್ಟಿಗೆ ಸಚಿನ್ ಯಜಮಾನರಿದ್ದಂತೆ, ಇದ್ದ ಬದ್ದ ದಾಖಲೆಗಳ ಜವಾಬ್ದಾರಿಯನ್ನೆಲ್ಲಾ ಅವರ ಮೇಲೆ ಎತ್ತಿ ಹಾಕಿ ಇಡಿಯ ಭಾರತವೇ ಕುತೂಹಲದಿಂದ ಕಾಯುತ್ತ ಕುಳಿತುಬಿಡುತ್ತದೆ. ಏಕದಿನ ಪಂದ್ಯದಲ್ಲಿ ಸಚಿನ್ ದ್ವಿಶತಕ ಸಿಡಿಸಬೇಕು, ಶತಕಗಳ ಶತಕವನ್ನು ಪೂರೈಸಬೇಕು, ವಿಶ್ವಕಪ್ ತರಬೇಕು... ಹೀಗೆ ಪಟ್ಟಿ ಸಾಗುತ್ತಲೇ ಹೋಗುತ್ತದೆ. ಕ್ರಿಕೇಟ್ ದೇವರು ಎಲ್ಲ ಬೇಡಿಕೆಗಳನ್ನು ಪೂರೈಸುತ್ತಲೇ ಹೋಗುತ್ತದೆ. ಸಚಿನ್ ಬತ್ತದ ಚಿಲುಮೆ. ಏಕದಿನ ಪಂದ್ಯಗಳಲ್ಲಿ ಐವತ್ತು ಶತಕಗಳಾಗಬೇಕು, ಟೆಸ್ಟ್ನಲ್ಲಿ ಮುನ್ನೂರು ರನ್ಗಳನ್ನು ಭಾರಿಸಬೇಕು, ಎಂಬ ಜನರ ಕನವರಿಕೆಗಳ ಸಾಕಾರಕ್ಕಾಗಿ ಅವರು ಮತ್ತಷ್ಟು ಹುರುಪಿನಿಂದ ಇನ್ನಷ್ಟು ದಿನ ಆಡೇ ಆಡುತ್ತಾರೆ. ಅದಕ್ಕೇ ಹೇಳುವುದು, ಭಾರತಕ್ಕೆ... ಜಗತ್ತಿಗೆ... ಕ್ರಿಕೆಟ್ಟಿಗೆ... ಒಬ್ಬನೇ ಸಚಿನ್.

No comments: