Saturday, August 21, 2010

ಕರೆಂಟ್ ಇನ್ ಕರ್ನಾಟಕ

ನಮ್ಮ ಏರಿಯಾಕ್ ಕರೆಂಟು ಬಂತು
ಕರೆಂಟು ಜೊತೆಗೆ ಕಂಬ ಬಂತು,
ಮನೆಯಲಿ ದೀಪ ಉರಿಯಲೆ ಇಲ್ಲ,
ಶೆಲ್ಲಿನ ರೇಡಿಯೊ ಹೇಳ್ತಾಯಿತ್ತು, ಲೋಡ ಶೆಡ್ಡಿಂಗು
ಆದ್ರೆ ನಮ್ಮ ರೂಬಿಗ್ ಬೇಜಾರಿಲ್ಲಾ,
ಕಂಬದ ಪಕ್ಕ ನಿಲ್ತಾಯಿತ್ತು ಕಾಲು ಎತ್ಕೊಂಡು.

ಬಡವನ ರಾತ್ರಿ

ಹೊತ್ತು ಮುಳುಗಿದ ಮೇಲೆ ಕತ್ತಲಾಗುವುದು
ದೀಪದ ಬೆಳಕು ಕಾಣಲು ಕತ್ತಲಿದ್ದರಷ್ಟೇ ಸಾಲದು
ದೀಪದಲಿ ಎಣ್ಣೆಯೂ ಇರಬೇಕು.

ಕತ್ತಲಾದ ಮೇಲೆ ಜಗವೇ ಮಲಗುವುದು
ಮಲಗಲು ಬರೀ ಹಾಸಿಗೆಯಿದ್ದರಷ್ಟೇ ಸಾಲದು,
ಹಸಿದ ಹೊಟ್ಟೆಯೂ ತುಂಬಬೇಕು.

ರಾತ್ರಿ ಹಸಿವಾದರೆ ಕೂಸು ಅಳುವುದು,
ಅದರಳು ನಿಲ್ಲಲು ಬಾಯಲ್ಲಿ ಮೊಲೆಯಿಡಟ್ಟರಷ್ಟೇ ಸಾಲದು,
ನನ್ನವಳ ಎದೆಯಲ್ಲಿ ಹಾಲೂ ಇರಬೇಕು.

ಅರ್ಥವಿಲ್ಲದ ಪ್ರಶ್ನೆ

ಅದೆಷ್ಟೊ ದಿನ ಊಟ ಬಿಟ್ಟೆ,
ರಾತ್ರಿಯೆಲ್ಲ ನಿದ್ದೆಗೆಟ್ಟೆ,
ಮನಸೆಂಬುದೇ ಮುಳ್ಳಾಗಿ,
ಎದೆಗೆ ಚುಚ್ಚಿದ ನೋವನ್ನೂ ಸಹಿಸಿದೆ.
ಸುತ್ತಲಿನವರು ನೋಡಿ ನಕ್ಕಾಗ,
ಆದ ಅವಮಾನವನ್ನೂ ಭರಿಸಿದೆ.
ಆದರೂ ನೀನು ಸಿಗಲಿಲ್ಲವೆಂದ ಮೇಲೆ,
ನನ್ನ ಜೀವನದಲ್ಲಿ ನೀ ನೀಡಿದ ನೋವಿಗೆಲ್ಲ ಏನು ಅರ್ಥ?

ಅರ್ಥವಿಲ್ಲದ ಪ್ರಶ್ನೆ

ಅದೆಷ್ಟೊ ದಿನ ಊಟ ಬಿಟ್ಟೆ,
ರಾತ್ರಿಯೆಲ್ಲ ನಿದ್ದೆಗೆಟ್ಟೆ,
ಮನಸೆಂಬುದೇ ಮುಳ್ಳಾಗಿ,
ಎದೆಗೆ ಚುಚ್ಚಿದ ನೋವನ್ನೂ ಸಹಿಸಿದೆ.
ಸುತ್ತಲಿನವರು ನೋಡಿ ನಕ್ಕಾಗ,
ಆದ ಅವಮಾನವನ್ನೂ ಭರಿಸಿದೆ.
ಆದರೂ ನೀನು ಸಿಗಲಿಲ್ಲವೆಂದ ಮೇಲೆ,
ನನ್ನ ಜೀವನದಲ್ಲಿ ನೀ ನೀಡಿದ ನೋವಿಗೆಲ್ಲ ಏನು ಅರ್ಥ?